ಹಂದಿ ಜ್ವರದ ಮತ್ತೊಂದು ಮುಖ


ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಹಂದಿ ಜ್ವರದ ಹಾಹಾಕಾರವೆದ್ದಿದೆ. ಇದೇ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಎಲ್ಲೆಡೆ ಪ್ರಸ್ತಾಪ ಬರುತ್ತಿದೆ. ಈ ಎಲ್ಲಾ ಗೊಂದಲಗಳ ನಡುವೆ, ಮಂಗಳೂರಿನ ತಜ್ಞ ವೈದ್ಯರಾದ ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಸಾಕಷ್ಟು ಸತ್ಯಗಳನ್ನು ಸಂಗ್ರಹಿಸಿ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಸಧ್ಯದ ಸಂದರ್ಭಕ್ಕೆ ಅತ್ಯಂತ ಸೂಕ್ತವೆನಿಸಿದ್ದರಿಂದ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. (ಮೂಲವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ) ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಅನೇಕ ವರುಷಗಳಿಂದ ವೈದ್ಯರಾಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಲೇರಿಯಾ ನಿರ್ಮೂಲನಾ ಆಂಧೋಲನ ಸೇರಿದಂತೆ ಅನೇಕ ಸಾರ್ವಜನಿಕ ಸ್ವಾಸ್ಥ್ಯ ಸಂಬಂಧೀ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. ವೈದ್ಯಕೀಯ ರಂಗದಿಂದ ಸತ್ಯ ಸಂಗತಿಗಳನ್ನು ಜನರಿಗೆ ತಿಳಿಸುವ ಕುರಿತು ಬಹಳ ಕೆಲಸ ಮಾಡಿದವರು. ಅವರ ‘ಆರೋಗ್ಯ ಸಂಪದ’ ಬ್ಲಾಗ್ ವೈದ್ಯಕೀಯ ರಂಗದಿಂದ ಕನ್ನಡದಲ್ಲಿ ಮೂಡಿಬರುತ್ತಿರುವ ಅಪರೂಪದ ಬ್ಲಾಗ್ ಆಗಿದೆ.

ಅವರ ಲೇಖನಕ್ಕೆ ತಮ್ಮನ್ನು ದಾಟಿಸುವ ಮುನ್ನ ಅದಕ್ಕೇ ಪೂರಕವಾಗಿ ಎರಡು ಮಾತು. ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ನಮ್ಮ ಮಾಧ್ಯಮಗಳದ್ದು ಭಾರೀ ದೊಡ್ಡ ಪಾತ್ರವಿದೆ. ಭಾರತದಲ್ಲಿ ಪ್ರತಿ ಕ್ಷಣ ಎಷ್ಟು ಮಕ್ಕಳು ಸಾಯುತ್ತಿದ್ದಾರೆ ಎಂದು ನಿಮಗೆ ಗೊತ್ತೇ? ಅವುಗಳಿಗೆ ಕಾರಣ ನಿಮಗೆ ಗೊತ್ತೇ? ಆದರೆ ಹಂದಿ ಜ್ವರದಿಂದ ಸತ್ತ ಅಷ್ಟೂ ಮಕ್ಕಳ ಸಂಖ್ಯೆ ನಿಮಗೆ ಗೊತ್ತು. ಏಕೆಂದರೆ, ಅದನ್ನು ಮಾಧ್ಯಮ ನಿಮಗೆ ತಿಳಿಸಿದೆ. ಆ ಮಕ್ಕಳು ಹಂದಿ ಜ್ವರಕ್ಕೆ ಮದ್ದು ಇದ್ದರೂ ಏಕೆ ಸತ್ತರು? ಇದರ ಬಗ್ಗೆ ಯೋಚಿಸಿದ್ದೀರಾ? ಒಮ್ಮೆ ಯೋಚಿಸಿದರೆ ನಿಮಗೆ ಮಾಧ್ಯಮಗಳ ಹಾಗೂ ವೈದ್ಯಕೀಯ ರಂಗದ ಖಳನಾಯಕರ ಕುತಂತ್ರ ನಿಮಗೆ ಥಟ್ಟನೆ ಅರ್ಥವಾಗದೇ ಹೋಗದು. ಎಲ್ಲಾ ಮನಸ್ಸುಗಳನ್ನು ನಿಯಂತ್ರಿಸುವ, ಪರ-ವಿರೋದ ಅಭಿಪ್ರಾಯ ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸುವ ಒಂದು ಏರ್ಪಾಡಿನ ನಿಯಂತ್ರಣ ಓರ್ವ ವ್ಯಕ್ತಿಯ ಕೈಯಲ್ಲಿ ಇರುವುದು ಎಂಥಾ ಅಪಾಯ ಎಂದು ಒಮ್ಮೆ ಯೋಚಿಸಿ ನೋಡಿ. ಭಾರತದಲ್ಲಿ ಮಾಧ್ಯಮಗಳಲ್ಲಿ ಪರದೇಶಗಳಿಂದ ಹಣ ತೊಡಗಿಸುವುದರ ಕುರಿತಾಗಿ ಕಟ್ಟುನಿಟ್ಟಿನ ನಿಯಮಗಳಿವೆ. ಇವು ಇರುವುದು, ದೇಶದೊಳಗಿನ ಮನಸ್ಸುಗಳ ನಿಯಂತ್ರಣವನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸದಂತೆ ನೋಡಿಕೊಳ್ಳಲು. ಸರಕಾರ ಇಂಥಾ ಒಂದು ನಿಯಮವನ್ನೇ ಜಾರಿ ತರಬೇಕಾದರೆ, ಮಾಧ್ಯಮಗಳು ಹೇಗೆ ನಮ್ಮನ್ನು ಆಳಬಹುದು ಎಂಬುದನ್ನು ನೀವು ಒಂದು ಅಂದಾಜು ಮಾಡಬಹುದಾಗಿದೆ. ಹೀಗಾಗಿ, ಮಾಧ್ಯಮಗಳಿಂದ ನಾವು ಪಡೆಯುವ ಸುದ್ದಿಯನ್ನೂ ಸೇರಿದಂತೆ ಪ್ರತಿಯೊಂದನ್ನೂ ಗ್ರಹಿಸಿಕೊಂಡು, ದತ್ತಾಂಶಗಳನ್ನು ಪರಿಶೀಲಿಸಿ, ಪರಿಹರಿಸಿಕೊಳ್ಳುವುದು ಇಂದಿನ ಸಾರ್ವಜನಿಕರಿಗೆ ತೀರಾ ಅಗತ್ಯ. ಅದಂತಿರಲಿ.. ಇದರ ಕುರಿತು ಮುಂದೊಮ್ಮೆ ವಿಸ್ತಾರದಲ್ಲಿ ಮಾತನಾಡೋಣ. ಸಧ್ಯಕ್ಕೆ ಡಾ| ಶ್ರೀನಿವಾಸ ಕಕ್ಕಿಲ್ಲಾಯರ ಲೇಖನ ಅವಶ್ಯ ಓದಿ. ತಮ್ಮ ಮಿತ್ರರಿಗೂ ಅವರ ಬ್ಲಾಗ್ ಬಗ್ಗೆ ತಿಳಿಸಿ, ಅರೋಗ್ಯದ ಬಗ್ಗೆ ಜಾಗೃತಿ ಹೆಚ್ಚಿಸಿ.

ಹಂದಿ ಜ್ವರವನ್ನು ತರುತ್ತಿರುವ ಹಂದಿ(?)ಗಳ ಬಗ್ಗೆ ಎಚ್ಚರ!!

ಏನಿದು ಹಂದಿ ಜ್ವರ? ಅದು ಭಾರತಕ್ಕೆ ಬರುತ್ತಿದೆಯಾ? ಇದು ಸಾವಿಗೆ ಕಾರಣವಾಗುತ್ತಿದೆಯಾ? ಇದಕ್ಕೆ ಬಡ ಹಂದಿಗಳು ಕಾರಣವೇ? ಹಂದಿ ಮಾಂಸ ತಿನ್ನುವುದರಿಂದ ಬರುತ್ತಾ? ಇದು ಇದ್ದಕ್ಕಿದ್ದ ಹಾಗೆ ಹೇಗೆ ಪ್ರಾರಂಭವಾಯಿತು? ಹೀಗೆ ಹಲವಾರು ಪ್ರಶ್ನೆಗಳು ನಿಮಗೆ ಕಾಡುತ್ತಿರಬಹುದು.

ಇದಕ್ಕೆ ಹಂದಿ ಜ್ವರವೆಂದು ಕರೆಯುವುದನ್ನು ಪ್ರತಿಭಟಿಸಿರುವುದರಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು, ಈಗ ಸ್ವೈನ್ ಫ್ಲೂ ಎಂದು ಕರೆಯುತ್ತಿದ್ದರೂ ಅದು ಮಾಮೂಲಿಯಂತೆ ಇನ್ ಫ್ಲುಯನ್ ಝಾ(Influenza) ಫ್ಲೂ ಆಗಿದೆ. ಫ್ಲೂ ಜ್ವರದಲ್ಲೇ ಇದೊಂದು ಮಾದರಿಯಾಗಿದ್ದು, ಹೆಚ್೧ ಎನ್೧ ವೈರಸ್ ನಿಂದ ಹರಡುತ್ತದೆ. ಆದರೆ ಇದಕ್ಕೆ ಇಷ್ಟೊಂದು ವ್ಯವಸ್ಥಿತ ಪ್ರಚಾರ ಯಾಕೆ ಪಡೆಯುತ್ತಿದೆ? ಇದರ ಹಿಂದಿರುವ ಮನುಷ್ಯ-ಹಂದಿಗಳ ಬಗ್ಗೆ ಎಚ್ಚರವಾಗಿರಿ.

ಫ್ಲೂ ಗೆ ಕಂಡು ಹಿಡಿದಿರುವ ವ್ಯಾಕ್ಸಿನ್ ವ್ಯಾಪಾರವನ್ನು ವೃದ್ಧಿಸಲು ಇದೊಂದು ಕುತಂತ್ರದ ಪ್ರಚಾರವಾಗಿದೆ. ಇದಕ್ಕಾಗಿ ಅಮೆರಿಕಾ ಸರ್ಕಾರ ನೇಮಿಸಿದ “ಎಡ್ವೈಸರಿ ಕಮಿಟಿ ಆನ್ ಇಮ್ಯುನೈಸೇಷನ್ ಪ್ರಾಕ್ಟಿಸಸ್(ACIP)” ಯಾರು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕೆಂದು ಸೂಚಿಸುತ್ತದೆ. ೧೯೯೯-೨೦೦೦ ರಲ್ಲಿ ೬೫ ವರ್ಷದ ಮೇಲ್ಪಟ್ಟವರು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕೆಂದು ಸೂಚಿಸಿದಾಗ ೭೪ ಮಿಲಿಯನ್ ಜನರು ವ್ಯಾಕ್ಸಿನೇಷನ್ ಮಾಡಿಸಿಕೊಂಡರು. ೨೦೦೦-೨೦೦೧ ರಲ್ಲಿ ಈ ವಯಸ್ಸನ್ನು ೬೫ ರಿಂದ ೫೦ ಕ್ಕೆ ಇಳಿಸಲಾಯಿತು. ಆಗ ೪೧ ಮಿಲಿಯ ಜನರು ಅಧಿಕವಾಗಿ ಸೇರಿಕೊಂಡಂತಾಯಿತು. ೨೦೦೨-೦೩ ಆರೋಗ್ಯವಂತ ೬ ರಿಂದ ೨೩ ತಿಂಗಳ ಮಕ್ಕಳನ್ನೂ, ೨೦೦೪-೦೫ ರಲ್ಲಿ ಐದು ವರ್ಷದೊಳಗಿನ ಮಕ್ಕಳನ್ನೂ ಸೇರಿಸಲಾಯಿತು. ೨೦೦೮-೦೯ ರಲ್ಲಿ ೬ ತಿಂಗಳಿಂದ ೧೮ ವರ್ಷದೊಳಗಿನ ಆರೋಗ್ಯವಂತ ಮಕ್ಕಳನ್ನೂ ಸೇರಿಸಿದ ಈ ಸಮಿತಿ, ಅಮೆರಿಕಾದ ೮೪% ಜನ ವ್ಯಾಕ್ಸಿನೇಷನ್ ಗೆ ಒಳಪಡುವಂತೆ ಮಾಡಿತು. ಈ ವರ್ಷದ ಫ್ಲೂ ಸೀಸನ್ ನಲ್ಲಿ ಔಷಧಿ ಕಂಪನಿಗಳು ಅಮೆರಿಕಾದಲ್ಲಿ ೧೪೬ ಮಿಲಿಯನ್ ಜನರಿಗೆ ವ್ಯಾಕ್ಸಿನೇಷನ್ ಮಾಡಿ ಒಳ್ಳೆಯ ವ್ಯಾಪರವನ್ನು ಮಾಡಿದವು.

ಈ ಸಮಿತಿಯಲ್ಲಿರುವ ಹೆಚ್ಚುಕಮ್ಮಿ ಎಲ್ಲ ಸದಸ್ಯರಿಗೂ ವ್ಯಾಕ್ಸಿನೇಷನ್ ಉತ್ಪಾದಿಸುವ ಸಂಸ್ಥೆಗಳೊಂದಿಗೆ ಹಣಕಾಸಿನ ಸಂಪರ್ಕವಿರುವುದು ಸ್ಪಷ್ಟವಾಗಿದೆ.

ಈಗ ಅಮೆರಿಕಾ ಮಾರುಕಟ್ಟೆಯಿಂದ ಭಾರತವೂ ಸೇರಿ ಜಗತ್ತಿನ ಮಾರುಕಟ್ಟೆಗೆ ಲಗ್ಗೆ ಇಡಲು ಈ ವ್ಯಾಕ್ಸಿನೇಷನ್ ಕಂಪನಿಗಳು ಸಿದ್ಧತೆ ನಡೆಸುತ್ತಿವೆ. ಈ ಪ್ರಚಾರದ ಪ್ರಕ್ರಿಯೆಯ ಅಂಗವೇ “ಹಂದಿ ಜ್ವರ”. ಜನರಲ್ಲಿ ಭಯವನ್ನು ಉತ್ಪಾದನೆ ಮಾಡಿ ವ್ಯಾಕ್ಸಿನೇಷನ್ ವ್ಯಾಪಾರ ವೃದ್ಧಿಸುವುದೇ ಇದರ ಉದ್ದೇಶ. ಅಮೆರಿಕಾದಂಥ ವಿದ್ಯಾವಂತ ಜನರಿಗೇ ಮೋಸ ಮಾಡಬಹುದಾದರೆ, ಭಾರತದ ಜನರಿಗೆ ಮೋಸ ಮಾಡುವುದು ಸುಲಭವೆಂದು ಹೇಳಬಹುದು. ಅಮೆರಿಕಾ ಅಧ್ಯಕ್ಷ ಓಬಾಮಾರವರೇ ಇದಕ್ಕೆ ಸ್ವರ ಸೇರಿಸಿರಬೇಕಾದರೆ, ನಮ್ಮ ದೇಶದ ರಾಜಕಾರಣಿಗಳಿಗೆ ದಾರಿ ಇನ್ನೂ ಸುಲಭವೆಂದು ಹೇಳಬಹುದು. ಆದ್ದರಿಂದ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಸಿದ್ಧರಾಗಿ!!

ಪ್ರತಿ ವರ್ಷವೂ ಇನ್ ಫ್ಲುಯನ್ ಝಾ ಮತ್ತು ಬ್ಯಾಕ್ಟಿರಿಯ ನ್ಯೂಮೇನಿಯಾ ಜ್ವರದಿಂದ ಸಾವಿರಾರು ಜನರು ಸಾಯುತ್ತಿದ್ದು, ಇವರು ಕೊಡುವ ಅಂಕಿ-ಅಂಶಗಳು ಯಾವ ಜ್ವರದಿಂದ ಸತ್ತಿದ್ದಾರೆಂದು ಸ್ಪಷ್ಟವಾಗುತ್ತಿಲ್ಲ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ವಯಸ್ಸಾದವರಲ್ಲಿ ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದು ೧೫% ರಿಂದ ೬೫% ಕ್ಕೆ ಏರಿದರೂ, ಇನ್ ಫ್ಲುಯನ್ ಝಾ ಫ್ಲೂ ಇಂದ ಸಾಯುವವರ ಸಂಖ್ಯೆ ಕಡಿಮೆಯಾಗಿಲ್ಲವೆಂದು ೨೦೦೮ರಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ೨೬೦೦೦೦ ಮಕ್ಕಳಲ್ಲಿ ವ್ಯವಸ್ಥಿತವಾಗಿ ಮಾಡಿದ ೫೧ ಅಧ್ಯಯನದಲ್ಲಿ ವ್ಯಾಕ್ಸಿನೇಷನ್ ನಿಂದಾದ ಪ್ಲಾಸೆಬೋ ಪರಿಣಾಮ ಬಿಟ್ಟರೆ ಯಾವುದೇ ರೀತಿ ಪರಿಣಾಮಕಾರಿಯಾಗಿರುವುದಕ್ಕೆ ಆಧಾರವಿಲ್ಲವೆಂಬ ತೀರ್ಮಾನಕ್ಕೆ ಬಂದಿದೆ. ವ್ಯಾಕ್ಸಿನೇಷನ್ ತೆಗೆದುಕೊಳ್ಳದವರಲ್ಲಿ ೩% ಜನರಿಗೆ ಇನ್ ಫ್ಲುಯನ್ ಝಾ ಫ್ಲೂ ಬಂದರೆ, ವ್ಯಾಕ್ಸಿನೇಷನ್ ತೆಗೆದುಕೊಡವರಲ್ಲಿ ೨% ಜನರಲ್ಲಿ ಇನ್ ಫ್ಲುಯನ್ ಝಾ ಫ್ಲೂ ಬಂದಿದೆ. ಕೇವಲ ೧% ವ್ಯತ್ಯಾಸ ಗಮನಾರ್ಹವಲ್ಲ. ಆದರೆ ಔಷಧಿ ಕಂಪನಿಗಳು ಅದನ್ನು ೫೦% ಸಾಧನೆಯೆಂದು ಬೊಗಳೆ ಹೊಡೆಯುತ್ತಿದ್ದಾರೆ. ೧೦೦ ರಲ್ಲಿ ಒಬ್ಬನಿಗೆ ಲಾಭವಾಗುವುದು, ವೈದ್ಯಕೀಯ ಭಾಷೆಯಲ್ಲಿ ಗಮನಕ್ಕೆ ತೆಗೆದುಕೊಳ್ಳುವಂತದಲ್ಲ. ೧೦೦ ರಲ್ಲಿ ಒಬ್ಬನಿಗೆ ಲಾಭವಾಗಿ, ಇಬ್ಬರು ಇನ್ ಫ್ಲುಯನ್ ಝಾ ಫ್ಲೂ ದಾಳಿ ಇಡುತ್ತದೆ.

Formaldehyde ನ್ನು ವೈರಸ್ ನಿಷ್ಕ್ರಿಯಗೊಳಿಸಲು ಉಪಯೋಗಿಸಲಾಗುತ್ತಿದ್ದು, ಇದು ಕ್ಯಾನ್ಸರ್ ಗೆ ಕಾರಣವಾಗುವುದೆಂದು ಗುರುತಿಸಲಾಗಿದೆ. ಇದರಲ್ಲಿ ಉಪಯೋಗಿಸುವ Triton X-100 (a detergent), Polysorbate 80, carbolic acid, ethylene glycol (antifreeze), gelatin, and various antibiotics –neomycin, streptomycin, and gentamicin – ಕೆಲವು ಜನರಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು.

ಕೆಲವೊಮ್ಮ ಫ್ಲೂ Alzheimer’s ಕಾಯಿಲೆಗೆ ಗುರಿಮಾಡುತ್ತದೆ ಎಂಬುದಕ್ಕೆ ಆಧಾರವಿದೆ. ವ್ಯಾಕ್ಸಿನೇಷನ್ ನಲ್ಲಿರುವ ಮೆರ್ಕುರಿ, ಅಲ್ಯೂಮೀನಿಯಂ ಮತ್ತು Formaldehyde ಜೊತೆ ಸಂಯುಕ್ತಗೊಳ್ಳುವುದೇ ಇದಕ್ಕೆ ಕಾರಣವೆಂದು ಕೆಲವರ ಅಭಿಪ್ರಾಯ. Alzheimer’s ಕಾಯಿಲೆಗೆ ಗುರಿಯಾಗುವವರು ವ್ಯಾಕ್ಸಿನೇಷನ್ ಪಡೆದವರಲ್ಲಿ ೧೦ ಪಟ್ಟು ಜಾಸ್ತಿ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಆದ್ದರಿಂದ ಇನ್ನೇನು ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ವ್ಯಾಕ್ಸಿನೇಷನ್ ಉಪಯೋಗ ಸಾಬೀತಾಗದಿರುವುದು ಮಾತ್ರವಲ್ಲ, ಅಪಾಯಕಾರಿಯೂ ಆಗಿದೆ.

ಚಳಿಗಾಲದಲ್ಲಿ ಸಾವಿಗೆ ಕಾರಣವಾಗುವುದು ಇನ್ಫ್ಲೆನ್ ಝಾ ಫ್ಲೂ ವೈರಸ್ ಗಿಂತ ವಿಟಾಮಿನ್ “ಡಿ” ಕೊರತೆಯಿಂದ ಉಂಟಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ನುರಿತ ವೈದ್ಯರ ಸಲಹೆ ಪಡೆದು ಸರಿಯಾದ ಪ್ರಮಾಣದಲ್ಲಿ “ವಿಟಾಮಿನ್ ಡಿ” ತೆಗೆದುಕೊಂಡರೆ ಸಾವಿನಿಂದ ಪಾರಾಗಬಹುದು. ವ್ಯಾಸ್ಕಿನೇಷನ್ ತೆಗೆದುಕೊಳ್ಳುವುದಕ್ಕಿಂತ “ವಿಟಾಮಿನ್ ಡಿ” ಮಾತ್ರೆಗಳನ್ನು ತೆಗೆದುಕೊಳ್ಳುವುದು ಕ್ಷೇಮಕರ ಮತ್ತು ಇನ್ ಫ್ಲುಯನ್ ಝಾ ಫ್ಲೂ ವನ್ನು ತಡೆಗಟ್ಟಬಹುದು.

ಹಂದಿ ಜ್ವರಕ್ಕಿಂತ ಈ ತರಹದ ಮನುಷ್ಯ-ಹಂದಿಗಳ ಬಗ್ಗೆ ನಾವು ಎಚ್ಚರದಿಂದಿರಬೇಕಾಗುತ್ತದೆ. ಇವರು ವ್ಯಾಪಾರಕ್ಕಾಗಿ ಯಾವುದೇ ಕೀಳುಮಟ್ಟಕ್ಕೆ ಇಳಿಯಲು ಸಿದ್ಧರಾಗಿರುತ್ತಾರೆ. ಜನರ ಜೀವವನ್ನು ಬಲಿಕೊಡಲು ಹಿಂದೆ ಮುಂದೆ ನೋಡದ ಈ ಹಂದಿಗಳೇ ಹೆಚ್ಚು ಅಪಾಯಕಾರಿ. ಇವರಿಗೆ ಹಣಕ್ಕಾಗಿ ಜೊಲ್ಲು ಸುರಿಸುವ ಭ್ರಷ್ಟ ಅಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ವೈದ್ಯ ಸಮೂಹದ ಬೆಂಬಲವಿರುವುದರಿಂದ ಈ ಸತ್ಯದ ಪ್ರಚಾರ ಕಷ್ಟ. “ಗಣಪತಿ ಹಾಲು ಕುಡಿದ” ಎಂದು ಎರಡೇ ದಿನದಲ್ಲಿ ಪ್ರಚಾರ ಮಾಡಿದ ಈ ದೇಶದ ಟಿವಿ, ಪತ್ರಿಕೆಗಳಿಗೆ “ಹಂದಿ ಜ್ವರ” ದ ಭಯವನ್ನು ಪ್ರಚಾರ ಮಾಡಿ ವ್ಯಾಕ್ಸಿನೇಷನ್ ವ್ಯಾಪಾರದ ಔಷಧಿ ಕಂಪನಿಗಳಿಗೆ ಸಹಾಯ ಮಾಡಲು ಕಷ್ಟವಾಗಲಾರದೆಂದು ಅನ್ನಿಸುತ್ತದೆ. ಜನ ಸುಳ್ಳನ್ನು ಸುಲಭವಾಗಿ ನಂಬುತ್ತಾರೆ, ಸತ್ಯವನ್ನು ನಂಬಲಾರರು. ಆದರೂ ಸ್ವಯಂಸೇವಾ ಸಂಸ್ಥೆಗಳು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬಹುದು.

This entry was posted in Society, Television. Bookmark the permalink.

8 Responses to ಹಂದಿ ಜ್ವರದ ಮತ್ತೊಂದು ಮುಖ

  1. shailaja s bhat ಹೇಳುತ್ತಾರೆ:

    This is very sad state,very few commomers think in this angle.Thanks for the information.
    Shailaja

  2. ಜಯಲಕ್ಷ್ಮಿ ಹೇಳುತ್ತಾರೆ:

    ಭಾರೀ ಒಳ್ಳೆಯದಾಯಿತು ನೀನು ಸರಿಯಾದ ಸಮಯದಲ್ಲಿ ಈ ಲೇಖನ ಬರೆದದ್ದು.ನೀನು ಎಚ್ಚರಿಸಿದ ಕೂಡಲೇ ನಾನು ಎಸ್ ಎಂ ಎಸ್ ಅಭಿಯಾನ ನಿಲ್ಲಿಸಿದೆ.

  3. Girisha M R ಹೇಳುತ್ತಾರೆ:

    Sorry Abhaya, can’t buy this. This sounds like one of those conspiracy theories where it alleged that President Bush paid his ‘connections’ in Saudi to attack US, so that he can infuse fear in Americans and make tons of money later on bunch of wars. Absurd, isn’t it? There was another theory that vatican ‘planted’ Sonia with Rajiv during their college days such that Christinaity could be promoted in India!!! It sounds so true when you connect the dots in the history, but it’s just an imaginary thrilling conspiracy theory. CIA may take credit for many conspiracies, but too many things has to go right for such a conspiracy to work right.
    What we are seeing is just a media frenzy – Trying to sensationalize matters! It’s true many healthcare companies are exploiting the situation, but that’s the name of the game. When in demand is greater than supply, price goes higher!

  4. sai ganesh ಹೇಳುತ್ತಾರೆ:

    very informative. thanks abhaya 🙂

  5. Pramod ಹೇಳುತ್ತಾರೆ:

    Indian Media is famous for these kind of stuffs. Nice information btw.

    ಟೀವಿಯವರು ದಿನದ 24 ಗ೦ಟೆ ಯಾವ ಯಾವ ರಾಜ್ಯ ಎಷ್ಟನೇ ಸ್ಥಾನದಲ್ಲಿದೆ ಅ೦ತಾ ಕೌ೦ಟ್ ಮಾಡ್ತಾ ಇದ್ದಾರೆ. ಒಳ್ಳೆ ಎಲೆಕ್ಷನ್ ಕೌ೦ಟಿ೦ಗ್ ತರಹ. ನೂರು ಕೋಟಿಯಲ್ಲಿ 20 ಜನ ದೊಡ್ಡ ನ೦ಬರ್ ಅಲ್ಲ.
    ಇದನ್ನು ಕೂಡ ಓದಿ.

  6. minchulli ಹೇಳುತ್ತಾರೆ:

    this is one timely articl. thanks a lot

  7. ಅಶೋಕ ವರ್ಧನ ಜಿ.ಎನ್ ಹೇಳುತ್ತಾರೆ:

    ಗಿರೀಶಾ, ಹೋಲಿಕೆಗಳು ಪೂರ್ಣ ಸತ್ಯವಾಗಲಾರದು. ಅಮೆರಿಕಾದ ಯುದ್ಧಪಿಪಾಸೆಯಲ್ಲದಿದ್ದರೆ ಇಂದು ಇರಾನ್, ಇರಾಕ್, ಅಫ್ಘಾನಿಸ್ತಾನ ಎಲ್ಲಾ ಬಿಟ್ಟು ನಮ್ಮ ಬಗಲಿನ ಉರಿ ಪಾಕಿಸ್ಥಾನ ಹೀಗೆ ಕುಲಗೆಡಲಿತ್ತೇ? ಯಾವುದೋ ಶ್ರುತಪಡಿಸಲಾಗದ ಕಥೆಗಳನ್ನು ಕಟ್ಟಿಕೊಂಡಿದ್ದಿ ನೀನು. ವೈಯಕ್ತಿಕವಾಗಿಯೂ ಸಾರ್ವಜನಿಕದಲ್ಲೂ ಸಾಮಾಜಿಕ ಸ್ವಾಸ್ಥ್ಯವನ್ನು ಗುರಿಯಾಗಿಟ್ಟುಕೊಂಡು ದುಡಿಯುತ್ತಿರುವ ಪ್ರಸ್ತುತ ವೈದ್ಯ ತನ್ನೆಲ್ಲ ತೀರ್ಮಾನಗಳಿಗೆ ಪೂರಕವಾದ ಮಾಹಿತಿಗಳಲ್ಲು ಪಾರದರ್ಶಕರಾಗಿದ್ದಾರೆ. ಮೊನ್ನೆ ಪುಣೆಯಲ್ಲಿ ಹಂದಿಯ ಸುದ್ದಿ ಸ್ಫೋಟ, ಇಲ್ಲಿ ಕರ್ನಾಟಕದಲ್ಲಿ ಆಗಲೇ ತನಿಖೆಗೆ ಕಿಟ್ಟು, ಚಿಕಿತ್ಸೆಗೆ ಮದ್ದು ಸಜ್ಜು. ಬಳ್ಳಾರಿಯಲ್ಲಿ ಕುಳಿತು ಅಪ್ಪಣೆ ಕೊಡಿಸುವ ಆರೋಗ್ಯ ಮಂತ್ರಿ ಇಂಥವು ನಿನಗೆ ಒಪ್ಪಿಗೆಯೇ?

    ಪೂರಕ ಮಾಹಿತಿಗಳು: ಅದೇ ಬ್ಲಾಗಿನಲ್ಲಿ ನೇರ ಕಕ್ಕಿಲ್ಲಾಯರೇ ಬರೆದಿರುವ ಕೇಂದ್ರ ಆರೋಗ್ಯ ಸಚಿವರಿಗೊಂದು ಪತ್ರ
    ಇಂದಿನ (೧೫-೮-೨೦೦೯) ಪ್ರಜಾವಾಣಿಯಲ್ಲಿ ಡಾ| ಬಿ.ಎಂ. ಹೆಗ್ಡೆ ಬರೆದ ಲೇಖನ

  8. Natesh Ullal ಹೇಳುತ್ತಾರೆ:

    Doctor says FLU VACCINE will cause 60,000 deaths in France alone
    http://www.prisonplanet.com/doctor-says-flu-vaccine-will-cause-60000-deaths-in-france-alone.html

    Dr Marc Girard, a specialist in the side effects of drugs and a medical expert commissioned by French courts, has said said on French TV that the “swine flu” vaccine could cause 60,000 deaths in France, especially among young people, children and pregnant women.

    He also said that the people promoting the “swine flu” vaccine are doing so because they have links with the pharmaceutical company.

    The problem with the “swine flu” vaccine is that it is not just “badly developed” but “not developed”, he said, adding that it is being prepared in conditions that endanger the public health.

    TRANSLATION:

    “A vaccine is being developed in conditions of amateurism such as I have never seen. Lets take the pessimistic hypothesis: one death among every 1000 patients. There are plans to vaccinate 60 million people, and you so you already have 60,000 deaths, and this time, young people, children, pregnant women.”

    “What you are saying is serious because many people are getting ready to get the vaccine and you, you are saying: „You must not get a vaccination!”

    ” YES, it is a vaccine that has been developed at great speed in conditions that put in danger the public health. There is a need to return back to the obligation that politicians have right now to protect citizens against the desire of the pharmaceutical industry to make money with all these vaccines. There is a public health code of law from 2007 which obliges all health professionals who give their opinions to reveal their interests. That law is ridiculed every day. All the people who you see saying: „the flu, its very serious, have interests, their lines interests, and that is why they say what they say. The public health administration is an example to us of a daily violation of the law. I am a medical specialist and I am against medicines that have no purpose. This vaccine is not just badly developed: it is not developed!”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s